CCA : ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು? ಇದು ಯಾರಿಗೆ ಅನ್ವಯವಾಗುತ್ತದೆ ? ಎಲ್ಲರಿಗೂ ತಿಳಿದಿರಬೇಕು

1955ರ ಪೌರತ್ವ ಕಾಯ್ದೆ :

ಪೌರತ್ವ ಕಾಯ್ದೆ ತಿದ್ದುಪಡಿಗೆ 2019 ರಲ್ಲಿ ಬಿಜೆಪಿ ಸರ್ಕಾರವು ಮಸೂದೆಯನ್ನು ಮಂಡಿಸಲಾಗಿತ್ತು ಅದಕ್ಕೆ ರಾಜ್ಯಸಭೆ ಹಾಗೂ ಲೋಕಸಭೆ ಎರಡೂ ಕೂಡ ಒಪ್ಪಿಗೆ ನೀಡಿದ್ದವು. ಅದಾಗಿ ನಾಲ್ಕು ವರ್ಷಗಳ ನಂತರ ಈ ಮಸೂದೆ ಜಾರಿಯಾಗುತ್ತಿದೆ. ಪೌರತ್ವ ತಿದ್ದುಪಡಿ ಮಸೂದೆ ಭಾರಿ ನಿರೀಕ್ಷಿತವಾದ ಕಾಯ್ದೆಯಾಗಿದ್ದು ಮಾರ್ಚ್ ಹನ್ನೊಂದರ ಸಂಜೆಯಿಂದ ಅಧಿಕೃತವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದೆ.

implementation-of-citizenship-amendment-act-in-india


ಈ ಮೂಲಕ ಕೇಂದ್ರ ಸರ್ಕಾರ ಅನೇಕ ವರ್ಷಗಳಿಂದ ತಾನು ನೀಡಿದ ಭರವಸೆ ಒಂದನ್ನು ಈಡೇರಿಸಿದೆ ಎಂದು ಹೇಳಬಹುದು ಅಸಲಿಗೆ ಪೌರತ್ವ ತಿದ್ದುಪಡಿ ಯೋಜನೆ ಎಂದರೆ ಎಂಬುದನ್ನು ನೋಡುವುದಾದರೆ,

ಭಾರತೀಯ ಪೌರತ್ವ ಕಾಯ್ದೆಗೆ 1995 ರ ಕಾಯ್ದೆಗೆ ಕೇಂದ್ರ ಸರ್ಕಾರ ಪೌರತ್ವವನ್ನು ಪಡೆಯಲು ಇದ್ದ ಭಾರತೀಯರಿಗೆ 2019ರಲ್ಲಿ ತಿದ್ದುಪಡಿತರಲಾಗಿತ್ತು. ಇದರಲ್ಲಿ ವಿಪಕ್ಷಗಳು ಕೆಲವು ಅಂಶಗಳ ವಿರುದ್ಧ ಕೆಂಗನ್ನು ಬೀರಿದ್ದವು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಯು ಮಂಡನೆಯಾಗಿ ಈ ಎರಡು ಸದನಗಳ ಒಪ್ಪಿಗೆಯನ್ನು ಪಡೆದಿದೆ ಅದಾದ ನಂತರ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕ ನಂತರ ಅದು ಕಾಯ್ದೆಯಾಗಿದ್ದರೂ ಕೂಡ ಜಾರಿಯಾಗಿರಲಿಲ್ಲ ಈಗ ಈ ಮಸೂದೆ 4 ವರ್ಷಗಳ ನಂತರ ಅಂದರೆ 2024ರಲ್ಲಿ ಈ ಕಾಯ್ದೆ ಜಾರಿಯಾಗುತ್ತಿದೆ ಎಂದು ಹೇಳಬಹುದು.

CCA ಎಂದರೆ ಏನು ? :

ಯಾರಿಗೆ ಭಾರತದಲ್ಲಿ ಪೌರತ್ವವನ್ನು ನೀಡಬೇಕು ಎಂಬುದಕ್ಕೆ 1955 ರಲ್ಲಿಯ ಪೂರಕವಾಗಿ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ ಭಾರತೀಯ ಸಂಜಾತರಿಗೆ ಭಾರತದಲ್ಲಿ ಹುಟ್ಟಿದವರಿಗೆ ಹಾಗೂ ಯಾವುದಾದರೂ ಸರ್ಕಾರದಿಂದ ಭಾರತದಲ್ಲಿ ಗುರುತಿಸಲ್ಪಟ್ಟ ಯೋಜನೆಯಲ್ಲಿ ನೊಂದಣಿ ಯಾದವರಿಗೆ ಭಾರತಕ್ಕೆ ವಲಸೆ ಬಂದವರಿಗೆ ಅಥವಾ ಯಾವುದೇ ಬೇರೆ ದೇಶದ ಭೂಭಾಗವು ಭಾರತಕ್ಕೆ ಸೇರ್ಪಡೆಯಾದಾಗ ಅಲ್ಲಿರುವ ಜನರಿಗೆ ಭಾರತದ ಪೌರತ್ವ ನೀಡುವುದಾಗಿ ಭಾರತ ಪೌರತ್ವ ಕಾಯ್ದೆಯ ಅಡಿಯಲ್ಲಿ ಉಲ್ಲೇಖಿಸಲಾಗಿತ್ತು.

2019ರಲ್ಲಿ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅಫ್ಘಾನಿಸ್ತಾನ ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದಲ್ಲಿ ದಬ್ಬಾಳಿಕೆಗೆ ಒಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬರುವ ಎಲ್ಲಾ ಮುಸ್ಲಿಂ ಮೇತರಿಗೆ ಭಾರತೀಯ ಪೌರತ್ವ ನೀಡುವುದು.

ಪೌರತ್ವ ಕಾಯ್ದೆ ತಿದ್ದುಪಡಿಯಲ್ಲಿ ಬದಲಾವಣೆ :

ಅಫ್ಘಾನಿಸ್ತಾನ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದವರಲ್ಲಿ ಭಾರತದ ಪೌರತ್ವವನ್ನು ನಿರ್ದಿಷ್ಟ ಸಮುದಾಯಗಳಿಗೆ ಸೇರಿದವರಿಗೆ ಮಾತ್ರ ನೀಡಬೇಕು ಎಂಬ ಅಂಶವನ್ನು 2019 ರಲ್ಲಿ ಕೈಗೊಂಡ ತಿದ್ದುಪಡಿಯ ಪ್ರಕಾರ ಸೇರಿಸಲಾಗಿದೆ. ತಮ್ಮ ದೇಶಗಳಿಂದ ಭಾರತಕ್ಕೆ ಕಾಲಿಟ್ಟ ದಿನಾಂಕದಿಂದಲೇ ಈ ಸಮುದಾಯದವರಿಗೆ ಭಾರತದ ಪೌರತ್ವ ಅನ್ವಯವಾಗುತ್ತದೆ.

ಭಾರತೀಯ ವಾಸ್ತವ್ಯವನ್ನು ಆ ನಿರ್ದಿಷ್ಟ ಸಮುದಾಯಗಳ ಸದಸ್ಯರ ಕಾನೂನು ಬಾಹಿರ ಎಂದು ಪರಿಗಣಿಸಿ ಅವರ ಮೇಲೆ ದಾಖಲಾಗಿರುವಂತಹ ಎಲ್ಲಾ ಕಾನೂನಾತ್ಮಕ ಪ್ರಕರಣಗಳಿಂದ ಪೌರತ್ವ ಸಿಕ್ಕಿದ ಕೂಡಲೇ ಅವರನ್ನು ಮುಕ್ತಿಗೊಳಿಸಲಾಗುತ್ತದೆ.

ಪೌರತ್ವ ತಿದ್ದುಪಡಿಯಲ್ಲಿರುವ ಕೆಲವು ನಿಯಮಗಳು ಭಾರತೀಯ ಪೌರತ್ವವನ್ನು ಪಡೆಯಬೇಕಾದರೆ ಭಾರತಕ್ಕೆ ಪಾಕಿಸ್ತಾನ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ನಿರಾಶ್ರಿತರಾಗಿ ಬಂದಿರುವವರಿಗೆ ಒಂದಿಷ್ಟು ನಿಯಮಗಳನ್ನು ವಿಧಿಸಲಾಗಿದೆ. ಹೊಸ ತಿದ್ದುಪಡಿಯ ಪ್ರಕಾರ ಭಾರತೀಯ ಪೌರತ್ವ ಕಾಯ್ದೆಯಲ್ಲಿ ಅಡಿಯಲ್ಲಿ ಭಾರತದ ಪೌರತ್ವವನ್ನು ಪಡೆಯಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು ಅವುಗಳೆಂದರೆ,

ನಿರಾಶ್ರಿತರು ಭಾರತೀಯ ಪೌರತ್ವವನ್ನು ಪಡೆಯಬೇಕಾದರೆ ಕನಿಷ್ಠ ಒಂದು ವರ್ಷದಿಂದ ಅವರು ಭಾರತದಲ್ಲಿ ಜೀವಿಸುತ್ತಿರಬೇಕು.

ಒಂದು ವೇಳೆ ಅವರೇನಾದರೂ ಕೇಂದ್ರ ಸರ್ಕಾರದ ನೌಕರರಾಗಿದ್ದರೆ ಕನಿಷ್ಠ 11 ವರ್ಷವಾದರೂ ಅವರು ಸೇವೆ ಸಲ್ಲಿಸಿರಬೇಕು.

11 ವರ್ಷಗಳ ಈ ನಿಯಮವನ್ನು ಕೆಲವು ಸಮುದಾಯಗಳಿಗೆ 5 ವರ್ಷಕ್ಕೆ ಇಳಿಸಲಾಗಿದೆ.

ತಿದ್ದುಪಡಿ ನಿಯಮಗಳಿಂದ ಕೆಲವು ಪ್ರಾಂತ್ಯಗಳಿಗೆ ವಿನಾಯಿತಿ ನೀಡಲಾಗಿದ್ದು ಭಾರತದ ಕೆಲವು ಪ್ರಾಂತ್ಯಗಳಿಗೆ ವಿನಾಯಿತಿ ನೀಡಲಾಗಿದೆ ಎಂಬುದು 2019ರ ಮಸೂದೆಯಲ್ಲಿಯೇ ಉಲ್ಲೇಖಿಸಲಾಗಿದೆ.

ಭಾರತ ಸಂವಿಧಾನದ ಆರನೇ ಶೆಡ್ಯೂಲ್ ನಲ್ಲಿ ಇರುವಂತಹ ಮಿಜೋರಾಂ ಮೇಘಾಲಯ ಅಸ್ಸಾಂ ತ್ರಿಪುರದಲ್ಲಿ ವಾಸಿಸುತ್ತಿರುವ ಜನರಿಗೆ ಪೌರತ್ವ ಕಾಯ್ದೆ ತಿದ್ದುಪಡಿ ಅನ್ವಯವಾಗುವುದಿಲ್ಲ.

ಆಂತರಿಕ ಗಡಿ ರೇಖೆ ಬಾಂಗ್ಲಾ ಪೂರ್ವ ಗಡಿ ನಿಯಂತ್ರಣ ನಿಯಮಗಳಿಗೆ ಅನುಗುಣವಾಗಿ ರೂಪಿಸಲಾಗಿದ್ದು ಈ ಗಡಿಯೊಳಗೆ ಜೀವಿಸುತ್ತಿರುವ ನಾಗರಿಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ.

ಸಾಗರೋತ್ತರ ಭಾರತೀಯ ಸಂಜಾತರಿಗೆ ಯಾವ ನಿಯಮ ?

ಸಾಗರೋತ್ತರ ಭಾರತೀಯ ಸಂಜಾತರು 1955ರ ಭಾರತೀಯ ಪೌರತ್ವ ಕಾಯ್ದೆಯ ಪ್ರಕಾರ ಭಾರತೀಯ ಮೂಲದವರಾಗಿದ್ದರೆ ಅದಕ್ಕೆ ಅವರು ಪೂರಕವಾದ ದಾಖಲೆಗಳನ್ನು ಸಲ್ಲಿಸಿ, ಭಾರತದ ಪೌರತ್ವವನ್ನು ಪಡೆಯಬಹುದು. ಒಂದು ವೇಳೆ ಅವರೇನಾದರೂ ಭಾರತೀಯ ಮೂಲದವರು ವಿವಾಹವಾಗಿದ್ದರೆ ಭಾರತೀಯ ಪೌರತ್ವಕ್ಕೆ ಅಂಥವರು ಸಹ ಅರ್ಹರಾಗಿರುತ್ತಾರೆ.

ಭಾರತಕ್ಕೆ ಬಂದು ಅಂಥವರು ನೆಲೆಸಲು ಹಾಗೂ ಭಾರತದಲ್ಲಿ ಶಿಕ್ಷಣ ಹಾಗು ಉದ್ಯೋಗಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ ಒಐಸಿ ಕಾರ್ಡ್ಗಳನ್ನು ಇಂತವರಿಗಾಗಿ ನೀಡಲಾಗುತ್ತಿದೆ. ಹೀಗೆ ಸಾಗರೋತ್ತರ ಭಾರತೀಯ ಸಂಜಾತರು 2019 ರ ತಿದ್ದುಪಡಿಯಲ್ಲಿ ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದಾಗ ಕೇಂದ್ರ ಸರ್ಕಾರಕ್ಕೆ ಒಐಸಿ ಕಾರ್ಡುಗಳನ್ನು ರದ್ದುಗೊಳಿಸುವ ಪರಮಾಧಿಕಾರವನ್ನು ನೀಡಲಾಗಿದೆ.

ಅಲ್ಪಸಂಖ್ಯಾತರಿಗೆ ಈ ತಿದ್ದುಪಡಿ ಕಾಯ್ದೆ ಮಾರಕವೇ ?

ಅಮಿತ್ ಶಾ ರವರು 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದಾಗ ಅಲ್ಪಸಂಖ್ಯಾತರಿಗೆ ಈ ತಿದ್ದುಪಡಿ ಇಂದ ಯಾವುದೇ ರೀತಿಯ ತೊಂದರೆ ಇಲ್ಲ ಅಥವಾ ಅಲ್ಪಸಂಖ್ಯಾತರು ಇದು ಪೌರತ್ವ ಪಡೆಯುವ ಹಕ್ಕುಗಳಿದ್ದ ವಂಚಿತರನ್ನಾಗಿಸುವ ಪ್ರಯತ್ನವು ಅಲ್ಲ ಎಂದು ಸ್ಪಷ್ಟವಾಗಿ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಹೇಳಿದ್ದರು.

ಅದೇ ಸಂದರ್ಭದಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ಆಫ್ಘಾನಿಸ್ತಾನ ದೇಶಗಳಲ್ಲೇ ತಿದ್ದುಪಡಿಯಲ್ಲಿ ಏಕೆ ಪರಿಗಣಿಸಲಾಗಿದೆ ಎಂದು ಸದನದಲ್ಲಿ ಕೇಳಲಾದಂತಹ ಪ್ರಶ್ನೆಗೆ ಅಮಿತ್ ಶಾ ರವರು ಉತ್ತರಿಸಿದ್ದು ವಿದೇಶಿಗರಿಗೆ ಕಾಲಾನುಕ್ರಮದಲ್ಲಿ ಭಾರತೀಯ ಪೌರತ್ವವನ್ನು ನೀಡಲಾಗುತ್ತಾ ಬಂದಿದೆ.

ಹೂಗಂಡ ಹಾಗೂ ಶ್ರೀಲಂಕಾದಿಂದ ಬಂದವರಿಗೂ ಕೂಡ ಈ ಹಿಂದೆ ಪೌರತ್ವ ಭಾರತೀಯ ಪೌರತ್ವವನ್ನು ನೀಡಲಾಗಿತ್ತು ಆದರೆ ಪೌರತ್ವ ನೀಡುವ ಪ್ರಸ್ತಾಪ ಆಗ ಪಾಕಿಸ್ತಾನ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಿಂದ ಬಂದಂತಹ ನಿರಾಶ್ರಿತರಿಗೆ ಮಾಡಲಾಗಿರಲಿಲ್ಲ. ಆ ಕೆಲಸವನ್ನು ಈಗ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಅಮಿತ್ ಶಾ ರವರು ಪೌರತ್ವ ಕಾಯ್ದೆ ತಿದ್ದುಪಡಿಯ ಸಂದರ್ಭದಲ್ಲಿ ಸದನದಲ್ಲಿ ಕೇಳಲಾದ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ನೀಡಿದರು.

ಒಟ್ಟಾರೆ ಭಾರತದಲ್ಲಿ ಇದೀಗ ಪೌರತ್ವ ತಿದ್ದುಪಡಿ ಕಾಯ್ದೆ ಮಾರ್ಚ್ 11 ಸಂಜೆಯಿಂದ ಜಾರಿ ಆಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾಗಿ ಜಾರಿಗೊಳಿಸಿದೆ. ಹಾಗಾಗಿ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರವು ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಜಾರಿಗೊಳಿಸಿದೆ ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

Previous Post Next Post

Ads

Ads

نموذج الاتصال

×