ಹಲೋ ಸ್ನೇಹಿತರೆ, ನಾವಿಂದು ಈ ಲೇಖನದಲ್ಲಿ ಮತ್ತೆ ಆರಂಭವಾಗುತ್ತಿರುವ ಇಂದಿರಾ ಕ್ಯಾಂಟೀನ್ ಬಗ್ಗೆ ತಿಳಿಸುತ್ತಿದ್ದೇವೆ. ರಾಜ್ಯದಲ್ಲಿ ಮತ್ತೊಮ್ಮೆ ಬರಲಿದೆ ಇಂದಿರಾ ಕ್ಯಾಂಟೀನ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್ ಅನ್ನು ಮರುಜೀವ ತಾಳುವಂತೆ ಮಾಡಲಾಗುತ್ತದೆ. ಆದರೆ ಇಂದಿರಾ ಕ್ಯಾಂಟೀನ್ನಲ್ಲಿ ಹೆಚ್ಚಿನ ಬದಲಾವಣೆಯನ್ನು ಮಾಡಲಾಗಿದೆ. ಇನ್ನು ಮುಂದೆ ನೀವು ಇಂದಿರಾ ಕ್ಯಾಂಟೀನ್ ಗೆ ಹೊಗುವ ಮುಂಚೆ ಈ ಎಲ್ಲ ರೂಲ್ಸ್ ಅನ್ನು ಒಮ್ಮೆ ಓದುವುದು ಮುಖ್ಯ. ಈ ಯೋಜನೆಯ ಲಾಭಗಳು ಯಾವುವು ಎಂದು ಈ ಲೇಖನದಲ್ಲಿ ನೀಡಲಾಗಿದೆ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಡ ಜನರಿಗೆ ನಗರ ಹಾಗೂ ಪಟ್ಟಣ ಗಳಲ್ಲಿ ಅತಿ ಕಡಿಮೆ ಬೆಲೆಗೆ ಹೊಟ್ಟೆತುಂಬುವಷ್ಟು ನೀಡುವ ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸುವುದ್ದಕ್ಕಾಗಿ ಇಂದಿರ ಕ್ಯಾಂಟೀನ್ ಜಾರಿಗೆ ತಂದು ಕರ್ನಾಟಕದ್ಯಂತ ನಿರ್ಮಿಸಲಾಗಿತ್ತು. ಅದರೆ ಇದೀಗ ಇಂದಿರಾ ಕ್ಯಾಂಟೀನ್ನಲ್ಲಿ ದೊಡ್ಡ ಬದಲಾವಣೆಯನ್ನು ಮಾಡಲಾಗಿದೆ.
ನೀವು ಕೂಡ ಇಂದಿರಾ ಕ್ಯಾಂಟೀನ್ ಹೋಗುವ ಮುಂಚೆ ಈ ಸಂಪೂರ್ಣ ವಿಷಯ ತಿಳಿದುಕೊಳ್ಳುವುದು ಉತ್ತಮ ಏಕೆಂದರೆ ಇಂದಿರಾ ಕ್ಯಾಂಟೀನ್ ಮೊದಲಿನಂತಿಲ್ಲ ಅನೇಕ ರೀತಿಯ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಸರ್ಕಾರದಿಂದ ಹೊಸ ಬದಲಾವಣೆ ಮಾಡಲಾಗಿದೆ. ಕಡಿಮೆ ಬೆಲೆಗೆ ಹೊಟ್ಟೆ ತುಂಬುವಷ್ಟು ಊಟ ನೀಡುವುದಕ್ಕೆ ಹೆಸರಾಗಿರುವ ಇಂದಿರಾ ಕ್ಯಾಂಟಿನ್ ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದಿದ್ದು ಇನ್ನಾದರೂ ಮರುಜನ್ಮ ಪಡೆದುಕೊಳ್ಳುತ್ತದೆಯೆ ಎಂದು ನೋಡಬೇಕಾಗಿದೆ.
ಸಾಕಷ್ಟು ಇಂದಿರಾ ಕ್ಯಾಂಟೀನ್ ಗಳು ಬಜೆಟ್ ಇಲ್ಲದೆ ಬಂದ್ ಆಗಿದ್ದವು ಈಗ ಮತ್ತೆ ಕಾಂಗ್ರೆಸ್ ಸರ್ಕಾರ ಆಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟಿನ್ ಗಳಿಗೆ ಮರುಜೀವ ನೀಡಿದಂತಾಗಿದೆ. ನೀವು ಕೂಡ ಒಂದಲ್ಲ ಒಂದು ಸಾರಿ ಇಂದಿರಾ ಕ್ಯಾಂಟೀನ್ ಅಲ್ಲಿ ಊಟ ಮಾಡಿದವರೆ ಆಗಿರುತ್ತಿರ, ಇಂದಿರಾ ಕ್ಯಾಂಟೀನ್ನಲ್ಲಿ ಬದಲಾಗಿರುವ ಹೊಸ ಮಾಹಿತಿಗಳು ಎನು ಎಂದು ನೋಡಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಈಗಾಗಲೇ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿರಾ ಕ್ಯಾಂಟೀನ್ ಬಗ್ಗೆ ಟ್ವೀಟ್ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ. ನಗರ ಪಟ್ಟಣಗಳಲ್ಲಿ ಇರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದ ನಮ್ಮ ಸರ್ಕಾರ ಪ್ರಾರಂಭಿಸಿದ ಇಂದಿರಾ ಕ್ಯಾಂಟಿನ್ಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ ಕಾರಣದಿಂದಾಗಿ ಕೆಲವು ಮುಚ್ಚದೆ, ಇನ್ನು ಕೆಲವು ಮುಚ್ಚುವ ಸ್ಥಿತಿಯಲ್ಲಿದೆ ಎಂದು ಕಿಡಿಕಾರಿದ್ದರೆ.
ಗರಿಭಿ ಹಟವೋ ಯೋಜನೆಯ ಮೂಲಕ ಬಡತನ ನಿರ್ಮೂಲನೆಯ ಕಾರ್ಯವನ್ನು ಕಾಂಗ್ರೆಸ್ ಸರ್ಕಾರದ ಕಾಂಗ್ರೆಸ್ ಸರ್ಕಾರ ಮಾಡಲಾಗಿತ್ತು ಈ ಯೋಜನೆಯನನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸವಿ ನೆನಪಿಗಾಗಿ ಪ್ರತಿಯೊಬ್ಬರ ಹೊಟ್ಟೆಯನ್ನು ತುಂಬಿಸುವ ಸಲುವಾಗಿ ಈ ಯೋಜನೆನ್ನು ಜಾರಿಗೆ ತರಲಾಯಿತು. ಆದರೆ ಕೆಲ ಕಾರಣಗಳಿಂದ ಅದನ್ನು ಮೂಲೆಗುಂಪು ಮಾಡಲಾಯಿತು ಆದರೆ ಮತ್ತೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಇನ್ನು ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಲು ಬಿಡುವುದಿಲ್ಲ. ಎಂದು ಸ್ವತಃ ಸಿದ್ದರಾಮಯ್ಯನವರೆ ವಿವರಿಸಿದ್ದಾರೆ.
ಅಗತ್ಯ ಸಂಪನ್ಮೂಲಗಳನ್ನು ಒದಗಿಸಿ ಅವುಗಳನ್ನು ಪುನಃಚೇತನಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದ್ದಾರೆ. ಅತಿ ಶೀಘ್ರದಲ್ಲಿ ಇಂದಿರಾ ಕ್ಯಾಂಟೀನ್ಗಳು ಸ್ವಸ್ತ ಮತ್ತು ರುಚಿಕರವಾದ ಊಟ ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿದೆ. ಹಸಿದವರ ಪಾಲಿಗೆ ಅನ್ನವೇ ದೇವರು ಎನ್ನುವುದನ್ನು ಸ್ವತಃ ಮುಖ್ಯಮಂತ್ರಿಗಳೆ ತಿಳಿಸಿದ್ದಾರೆ.
ಈಗಾಗಲೆ ಇಂದಿರಾ ಕ್ಯಾಂಟೀನ್ ಟೇಂಡರ್ ಹೇಳಿದ್ದಾರೆ. ಈಗಾಗಲೇ ಟೇಂಡರ್ ಪ್ರಕ್ರಿಯೆ ಆರಂಭವಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಕ್ಯಾಂಟಿನ್ ಗೆ ಅಡುಗೆ ಕೋಣೆ ವಸ್ತುಗಳನ್ನು ಬದಲಾಯಿಸಬೇಕಾಗಿದೆ. ಉಪಹಾರ ದರ ಐದರಿಂದ ಹತ್ತು ರೂಪಾಯಿಗೆ ಏರಿಕೆ ಮಾಡಲಾಗುತ್ತದೆ. ರಾತ್ರಿ ಊಟಕ್ಕೆ ಬೇಡಿಕೆ ಕಡಿಮೆ ಇರುವುದರಂದ ಅದು ಹಾಗೇಯೆ ಮುಂದುವರೆಯುವುದು . ಹಣ ಪಾವತಿಯಾಗಿಲ್ಲ ಎನ್ನುವ ದೂರು ಕೆಳಿಬಂದಿದೆ ಮಾರ್ಷಲ್ ನೀಡುವ ವರದಿಯ ಅನ್ವಯ ಉಪಹಾರದ ಹಣ ಪಾವತಿ ಮಾಡಿದ್ದೇವೆ ಒಂದು ತಿಂಗಲಿನಲ್ಲಿ ಟೇಂಡರ್ ಗುತ್ತಿಗೆ ದಾರರಿಗೆ ಹಣವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
2017ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿದ್ದರು ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಬಾರಿ ಜನಪ್ರಿಯವಾಗಿತ್ತು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 175 ಇಂದಿರಾ ಕ್ಯಾಂಟೀನ್ಗಳನ್ನು ಸ್ಥಾಪಿಸಲಾಗಿತ್ತು. ಇದಲ್ಲದೆ ಹಲವು ಜಿಲ್ಲಾ ಕೇಂದ್ರಗಳಲ್ಲಿಯು ಹಲವು ಇಂದಿರಾ ಕ್ಯಾಂಟೀನ್ ಸ್ಥಾಪಿಸಲಾಗಿತ್ತು. ಇದು ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು.
ಇದೀಗ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಊಟ ತಿಂಡಿಯನ್ನು ಬಡಜನರಿಗೆ ನೀಡಲು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಈಮೂಲಕ ಇಂದಿರಾ ಕ್ಯಾಂಟೀನ್ ಹಸಿದವರ ಹೊಟ್ಟೆಯನ್ನು ತುಂಬಿಸುವ ಕೆಲಸವನ್ನು ಮಾಡುತ್ತಿದೆ. ಈ ಯೋಜನೆಯಿಂದ ಅನೇಕ ಬಡವರಿಗೆ ತುಂಬನೆ ಸಹಯಕವಾಗುತ್ತದೆ ಎನ್ನುವುದು ರಾಜ್ಯದ ಜನರ ಅಭಿಪ್ರಾಯವಾಗಿದೆ. ನೀವು ಕೂಡ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳ ಬಹುದಾಗಿದೆ.